Saturday, November 21, 2009

ಹಸಿರ ವನ

ಏರಿಳಿಯುತ ನಡೆಯುತ್ತಿರೆ ನಮ್ಮೂರಿನ ದಾರೀ,
ದಣಿವರಿಯದು ಮನಸೆಳೆವುದು ಹಸಿರಿನ ಕೇರೀ;

ಹಸಿರಿಂದಲಿ ಹೊಳೆಯುತ್ತಿದೆ ನಿಸರ್ಗದ ನೋಟಾ,
ಸಿಂಗಾರದ ನೆಲೆವೀಡಿದು ಕಂಗೊಳಿಸುವ ತೋಟಾ;

ನಿರ್ಭಯದಲಿ ನರ್ತಿಸುತಿದೆ ತಾಣದಿ ನವಿಲು,
ವಾಸಂತಿಕೆ ಮೈ ಮರೆಸಿತು ಕಾನನದಾ ಚೆಲುವು;

ತಂಬೆಲರಿನ ಕುಡಿ ಚಿಗುರಿದೆ ಪ್ರುಥ್ವಿಯು ಹಸಿರಾಗೀ,
ಕಾರ್ಮೋಡದ ಜತೆ ಮೈತ್ರಿಯು ಪಚ್ಚನೆಯಾ ಬೆಳೆಗಾಗೀ;

ನಮ್ಮ ಬೆವರಿನ ಹನಿ ಆಸರೆ ಸುಂದರ ಹೂಬನಕೆ,
ಪ್ರೇಮದಲೀ ಬೆಳೆಯಿಸಿರುವ ಕುಸುಮಗಳಾ ಸೊಗಕೆ;

ಜಗದೊಡೆಯಾ ಪರಮಾತ್ಮಾ ಶ್ರೀಕೃಷ್ಣಗೆ ಒಲವೂ....,
ಮಣ್ಣಲಿ ಅರಳುತಲಿಹ ಪರಿಮಳದಾ ಹೂವೂ.....!

No comments:

Post a Comment