Sunday, October 18, 2009

ಸೂರ್ಯಾಸ್ತ


ದಿಗಂತದೆಲ್ಲೆಡೆ ಕುಂಕುಮ ಬೆಳಕು,
ಭಾನುವು ಭುವಿಗಿತ್ತ ಹೊಂಬೆಳಕು;
ಸೂರ್ಯನು ಕಡಲಲಿ ಮುಳುಗೇಳುವ ಕಲೆ,
ಕತ್ತಲು-ಬೆಳಕಿನ ಕಣ್ಣು-ಮುಚ್ಚಾಲೆ;
ಕಡಲಿನ ಒಡಲಲಿ ತಂಪಿನ ಸುಧೆಯಲಿ,
ಸೂರ್ಯನು ಮುಳುಗಿದನೆನ್ನುವ ಭ್ರಮೆಯಲಿ;
ನಭದಲಿ ಹಾರುವ ಹಕ್ಕಿಯ ಹಿಂಡು,
ಗೂಡನು ಸೇರಿತು ಕತ್ತಲೆ ಕಂಡು;
ದಿನಕರ ಸುಡುತಲಿ, ಬೆಳಕನು ಕೊಡುತಲಿ,
ಶ್ರಮದ ಬೆವರಹನಿ ವಸುಧೆಯಲಿಳಿಯಲಿ !
ಬಿಸಿಲಿ ಬೇಗೆಗೆ ಬಸವಳಿದಿದೆ ಭುವಿ,
ನೀಲ ಶರಧಿಯೊಳು ವಿರಮಿಸಿದನು ರವಿ;
ಕತ್ತಲು ಕಳೆಯಿತು ತಾರಾಗಡಣ,
ಬೆಳಗಿತು ತಿಂಗಳು ಬೆಳಕಿನ ಕಿರಣ;
ದಿನಮಣಿಯೊಲುಮೆ ಶಶಾಂಕನುಧಿಸಿದ,
ತ್ಯಾಗದ ಪ್ರಭೆಯನು ಇರುಳಲಿ ಬೀರಿದ!


No comments:

Post a Comment